13 ನವೆಂಬರ್, 2009

ದೇಶದಲ್ಲಿ ಬಿಜೆಪಿ ಬದುಕಿರುತ್ತಿದ್ದರೆ......

powerful ರೆಡ್ಡಿ ಸಚಿವರೊಬ್ಬರ ಪ್ರಕಾರ 'ಕ್ಲೈಮ್ಯಾಕ್ಸ್ ಇನ್ನೂ ಮುಗಿಲ್ಲ'ವಂತೆ! ನಿಜಕ್ಕೂ ವರಿಷ್ಟ ಎಂದು ನಾವಂದುಕೊಂಡಿದ್ದ ಬಿಜೆಪಿ ಮಂಡಲಿ ಏನಾದರೂ ತೀರ್ಮಾನ ಕೈಗೊಳ್ಳುತ್ತಿದ್ದವರೆಗೆ ಕ್ಲೈಮ್ಯಾಕ್ಸ್ ಉಳಿದುಕೊಂಡಿತ್ತು. ಆದರೆ ಅದೇ, ಹಸಿದ ಹೆಬ್ಬುಲಿ, ಅಪ್ಪಾವಿ ಹರಕೆಯ ಕುರಿ ಮತ್ತು ಅದು ಒಂದಿಷ್ಟುದಿನ ಬದುಕಿರಲು ಹಿಡಿಹುಲ್ಲುಗಳನ್ನು ಒಂದು ಬೋನಿನಲ್ಲಿಟ್ಟು ಬೀಗಹಾಕುವ ರಾಜೀಸೂತ್ರವನ್ನು ಹೆಣೆದಾದಮೆಲೆ ಇನ್ನೆಂಥಾ'ಕ್ಲೈಮ್ಯಾಕ್ಸ್'? ಈಗ ಎನಿದ್ದರೂ ಆಂಟೀ-ಕ್ಲೈಮ್ಯಾಕ್ಸ್ ಮಾತ್ರಾ. ಇಟ್ಟ ವಸ್ತುಗಳಲ್ಲಿ ಯಾವುದನ್ನು ಯಾವುದು ತಿಂದುಹಾಕೀತೆನ್ನುವುದು Obvious ವಿಚಾರ. ಇನ್ನೂ ರೆಡ್ಡಿಯವರ ಈ ನಿರೀಕ್ಷೆ ನೋಡಿ ಬಿಜೆಪಿಗೆ ಈಗಲೇ ಶ್ರಸದ್ಧಾಂಜಲಿ ಬರೆದುಬಿಡಬೇಕೆನಿಸಿತು!
ಒಬ್ಬ ಮನುಷ್ಯ ಸತ್ತಮೇಲಷ್ಟೇ ಅಲ್ಲವೇ, ಅತ ಬದುಕಿದ್ದಾಗಿನ ಮೌಲ್ಯ ಅರ್ಥವಾಗುವುದು? ಅದರಲ್ಲೂ ಅಕಾಲಮೃತ್ಯುವಿಗೆ ತುತ್ತಾದ ವ್ಯಕ್ತಿಯ ಬಗ್ಗೆಯಂತೂ ಮರುಕ ಉಮ್ಮಳಿಸಿ ಬರುತ್ತದೆ! ಆದ್ದರಿಂದಲೇ ಇಂಥವರಿಗೆ ಸಲ್ಲಿಸುವ ಶ್ರದ್ಧಾಜಲಿಯಲ್ಲಿ ಮಾಮೂಲೀ ಉತ್ಪ್ರೇಕ್ಷೆಯಿದ್ದರೂ ನಿಜವಾದ ಕಳಕಳಿಯೂ ಒಂದಷ್ಟು ಇದ್ದೇ ತೀರುತ್ತದೆ! ಮಹಾಚುನಾವನೆಯಲ್ಲಿ, ಪಕ್ಷ, ಮಣ್ಣು ಮುಕ್ಕಿದ್ದಕ್ಕೆ ತೂ-ತೂ, ಮೈ-ಮೈ 'ವ್ಯಕ್ತಿ'ಗಳು ಕಾರಣವಿರಬಹುದು. ಆದರೆ ನಂತರದ ಅಸೆಂಬ್ಲಿ ಚುನಾವಣೆ ಮತ್ತು ಉಪಚುನಾವಣೆಗಳಲ್ಲಾದರೂ ಮೀಸೆ ಒರೆಸಿಕೊಳ್ಳುವುದು ಸಾಧ್ಯವಾಗದ್ದಕ್ಕೆ ಕಾರುಬಾರಿನ ಸನ್ನಿವೆಶವೇ ಕಾರಣವಲ್ಲವೇ? ಈ ಬಗ್ಗೆ ಯಾವ ಸಮಾವೇಶದಲ್ಲೂ ಪ್ರಾಮಾಣಿಕ 'ಆತ್ಮಾವಲೋಕನ' ನಡೆದಂತೆಯೇ ಎನಿಸುವುದಿಲ್ಲ!
ನಿಜವಾಗಿ ಬಿಜೆಪಿ ಏತಕ್ಕಾದರೂ ಬೇಕಾಗಿತ್ತು? ಅಲ್ಪಸಂಖ್ಯಾತರೆಂಬ ಪ್ರತ್ಯೇಕತೆಯನ್ನು ಉಳಿಸಿ ಬೆಳೆಸುವ ಒಲೈಕೆ ರಾಜಕೀಯಕ್ಕೆ ಮಂಗಳ ಹಾಡಿ ಅವರನ್ನು ಸಮಾನವಾಗಿ ರಾಷ್ಟ್ರೀಯ ಮುಖ್ಯವಾಹಿನಿಗೆ ತರುತ್ತದೆಂಬ ನಂಬಿಕೆ ಬಿಜೆಪಿ ಮೇಲಿತ್ತು; ಇದೇ ವಿಷಯವನ್ನು ನೆಪ ಮಾಡಿಕೊಂಡು ಅಲ್ಪಸಂಖ್ಯಾತರಲ್ಲಿ ಭಯೋತ್ಪಾದನೆ ಮಾಡುವ ವಿವೇಕಹೀನ ಉಗ್ರರ ಚಿಕ್ಕ ಗುಂಪೊಂದು ಪಕ್ಷದೊಳಗೇ ಸಮಾವೇಶವಗಿತ್ತಾದರೂ ಅದನ್ನು ಹಿಡಿತದಲ್ಲಿಟ್ಟುಕೊಳ್ಳುವ ಸಾಮರ್ಥ್ಯ-ವಿವೇಕವನ್ನೂ ಪಕ್ಷದ ಹೈಕಮಾಂಡಿನಲ್ಲಿ ಜನ, ನಿರೀಕ್ಷಿಸಿದ್ದರು; ಅಭಿವೃದ್ಧಿಗಾಗಾಗಿ 'ಗುಜರಾತ್ ಮಾದರಿ'ಯನ್ನು ಹಾಡಿ-ಹೊಗಳಿದ್ದು, ಜನತೆಯನ್ನು ಪುಳಕಗೊಳಿಸಿತ್ತು! ಆದರೆ ಸೋತ ಸಂಕಟದಲ್ಲಿ ಇದೆಲ್ಲಾ ನಿರೀಕ್ಷೆ ಮತ್ತು 'ವಿವೇಕ', 'ಪ್ರಾಮಾಣಿಕತೆ'ಯನ್ನೂ ಮನೆಗೆ ಕಳಿಸಲಾಯಿತು!
ಈಗ ಇದೊಂದು ಅನನುಭವಿ ರಾಜಕೀಯ ಪಕ್ಷಮಾತ್ರವಾಗಿಹೋಗಿರುವಂತಿದೆ! ಇಲ್ಲದಿದ್ದರೆ ಇದು ಸಹ ಇತರ ಪಕ್ಷಗಳಂತೆ, 'ಪಾರ್ಟಿ ಫಂಡ್‌'ಗಾಗಿ ಧನಾಢ್ಯರನ್ನು ಓಲೈಸಿ, ಅವರನ್ನು ಎದುರು ಹಾಕಿಕೊಳ್ಳಲಾರದೇ, ಆ ಕೈಗಳಿಗೇ ಕೈಯಾರೆ ಜುಟ್ಟೊಪ್ಪಿಸಿಕೊಡುವ ರಾಜೀ ಸೂತ್ರ ತಯಾರಿಸುತ್ತಿತ್ತೇ?!
ನಾಳೆಯ ನಿರೀಕ್ಷೆ ಇರದ, ಇಂದಿನ ಬಗ್ಗೆ ಸದಸದ್ವಿವೇಕವೂ ಇರದ ಹತಾಶ ಪಕ್ಷವೊಂದು, ಪ್ರಮುಖ ರಾಷ್ಟ್ರೀಯ ವಿಪಕ್ಷವಾಗಿಯಾದರೂ, ಅಡಳಿತದ ಅತಿರೇಕಗಳಿಗೆ ಸಮರ್ಥವಾಗಿ ಅಂಕುಶ ಹಾಕಬಲ್ಲುದೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ