27 ಅಕ್ಟೋಬರ್, 2009

ಪ್ರಜಸತ್ತೆಯೋ? ಪಾಳೇಗಾರಿಕೆಯೋ?

ಅಕ್ಟೋಬರ‍್ 28, 2009
ಪ್ರಜಾಸತ್ತೆಯೋ? ಪಾಳೇಗಾರಿಕೆಯೋ?
ಆಡಳಿತ ಬಿಜೆಪಿ ರಾಜ್ಯ ಘಟಕದಲ್ಲಿನ ಭಿನ್ನಮತ, ಪಕ್ಷ, ರಾಷ್ಟ್ರ ಮಟ್ಟದಲ್ಲಿ ಸೋತು ಸುಣ್ಣವಗಿರುವ ಸಂದರ್ಭದಲ್ಲಿ ರಾಜಾರೋಷವಾಗಿ ಭುಗಿಲೆದ್ದಿರುವುದು ಸಹಜ ಪ್ರಕ್ರಿಯೆ. ಭಿನ್ನಮತೀಯ ಎನ್ನಲಾದ ಬಣ, ಮಂಗಳವಾರದ ಬೆಳವಣಿಗೆಯಲ್ಲಿ ಮೆರೆದ ದರ್ಪವನ್ನು ನೋಡಿದರೆ, ಮುಖ್ಯಮಂತ್ರಿಗಳು ಇಷ್ಟುದಿನ "ಪ್ರದರ್ಶಿಸಿದ" ತ್ಯಾಗಶೀಲತೆ, ಪ್ರಾಮಾಣಿಕತೆಗಳೆಲ್ಲಾ ಕೇವಲ ವೈಯಕ್ತಿಕ ಶ್ರೇಷ್ಠತೆಯೂ ರಾಜಕೀಯವಾಗಿ ವ್ಯರ್ಥ ಸ್ಟ್ರಾಟಜಿಯು ಆದಂತೆನಿಸತೊಡಗಿದೆ. ಇದೇನಿದ್ದರೂ ಜನನ್ನು ಮರಳು ಮಾಡುವ ವಿಧನವಿರಹುದು, ಆದರೆ ಮುತ್ಸದ್ದಿ ಮಹೋದಯ ಸಹೋದ್ಯೋಗಿಗಳು ಸೊಪ್ಪು ಹಾಕಿಯಾರೇ?! ಚುನಾವಣೆಯಲ್ಲಿ, ಯಾವುದೋ ಭ್ರಮೆಯಿಂದ ಒಂದು ಪಕ್ಷದ ಕೈಹಿಡಿದು ಮೇಲೆತ್ತಿದ ಜನಸಾಮಾನ್ಯರು, ಚುನಾಣಾಧಿಕಾರಿ ಫಲಿತಾಂಶ ಘೊಷಿಸಿದ ಮರುಕ್ಷಣದಲ್ಲೇ ಅಮಾನ್ಯರಾಗಿಬಿಡುತ್ತಾರೆ. ಆ ನಂತರ ಅನ್ಯಾಯದ ವಿರುದ್ಧ ಅವರ ಅಳಲು, ಅಬ್ಬರಗಳೇನಿದ್ದರೂ ಅರಣ್ಯರೋಧನವಾಗಿಬಿಡುತ್ತದೆ. ಬಣ ಬಣದ ಮೇಲಾಟದ ಹೆಸರಿನಲ್ಲಿ ಶಾಸಕರನ್ನು ಬಿಡ್ ಮಾಡಿ ಕೊಳ್ಳಬಲ್ಲ ಪಾಳೇಗಾರರು ಅಧಿಪತಿಗಳಾಗುತ್ತಾರೆ. ನಾವೂ-ನೀವೂ ಕಮಕ್-ಕಿಮಕ್‌ ಎನ್ನುವಂತಿಲ್ಲ!
ಆರ‍್. ಕೆ. ದಿವಾಕರ
ಕರೆ: 9448047559 ವಿ-ಅಂಚೆ
ಬ್ಲಾಗ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ